ಪತ್ರಿಕೋದ್ಯಮ ಆಧುನಿಕ ಪ್ರಪಂಚದ ಕೈಗನ್ನಡಿಯಾಗಿದೆ, ಮತ್ತು ಸರ್ಕಾರದ ನಡುವೆ ಸೇತುವೆಯಂತೆ ರಾಷ್ಟ್ರದ ಅಭಿವೃದ್ಧಿಗೆ ಸಂಸ್ಕøತಿಯ ಪ್ರಸಾರಕ್ಕೆ ಮತು ಒಟ್ಟಾರೆ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸವನ್ನು ನಿರ್ವಹಿಸುತ್ತದೆ. ಪತ್ರಿಕೋದ್ಯಮ ಒಂದು ಕಲೆಯಾಗಿದ್ದು, ಅದು ಸೃಜನಾತ್ಮಕ ಮತ್ತು ಸಮುದಾಯಾತ್ಮಕ ಕ್ರಿಯೆಗೆ ಬಳಸಲ್ಪಡುತ್ತಿರುವ ಪ್ರಮುಖ ಸಂಪರ್ಕ ಮಾಧ್ಯಮವಾಗಿ ಬೆಳೆದು ನಿಂತಿದೆ.
“ಸಾವಿರ ಯುದ್ದ ಸೈನಿಕರನ್ನು ಎದುರಿಸುವುದಕ್ಕಿಂತ ವಿರೋಧ ಮಾಡುವ ನಾಲ್ಕು ಪತ್ರಿಕೆಗಳನ್ನು ಎದುರಿಸುವುದಕ್ಕೆ ಭಯವಾಗುತ್ತದೆ” ಎಂದಿರುವ ನೆಪೋಲಿಯನ್ ಹೇಳಿಕೆಯೊಂದು ಪತ್ರಿಕೋದ್ಯಮದ ಪ್ರಭಾವವನ್ನು ಸಾರುತ್ತದೆ. ಒಂದು ಸಾಮಾಜಿಕ ವ್ಯವಸ್ಥೆಗೆ ಪರಿಪೂರ್ಣವಾದ ರೂಪರೇಷಗಳನ್ನು ರಚನಾತ್ಮಕವಾಗಿ ಹಾಗೂ ಯೋಜನಾ ಬದ್ದವಾಗಿ ರೂಪಿಸುವ ಪತ್ರಿಕೋದ್ಯಮ ಸಾಮಾಜಿಕ ಮಾರ್ಗದರ್ಶನ ಮಾಡುತ್ತದೆ. ವರದಿಗಳ ಮುಖಾಂತರ ಪ್ರಪಂಚದ ಮಾಹಿತಿಯನ್ನು ಓದುಗ ಸಮೂಹಕ್ಕೆ ತಲುಪಿಸುತ್ತಿರುವ ಪತ್ರಿಕೆಗಳು ರಾಷ್ಟ್ರ ಪುನರ್ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿವೆ. ಅದರೆ ಇಂದಿನ ಪತ್ರಿಕೆಗಳು ರಾಜಕೀಯ ಸುದ್ದಿಗಳಿಗೆ ನೀಡುವಷ್ಟು ಮಹತ್ವ ಇನ್ನುಳಿದ ವಿಷಯಗಳಿಗೆ ನೀಡುತ್ತಿಲ್ಲ ಎಂಬ ಮಾತನ್ನು ಒಪ್ಪಿಕೊಳ್ಳಬೇಕಾಗಿದೆ.
ಅದರೂ ಕನ್ನಡ ಪತ್ರಿಕೋದ್ಯಮದ ಇತ್ತೀಚಿನ ಬದಲಾವಣೆಗಳಲ್ಲಿ ಕೃಷಿ ಸಂಬಂಧಿತ ಪುರವಣಿಗಳನ್ನು ಅರಂಭಿಸಿ ಮತ್ತೊಂದು ಓದುಗರ ಬಳಗವನ್ನು ರೂಪಿಸಿದೆ ಎಂದು ಹೇಳಬಹುದು. ಕೃಷಿ ಸಂಬಂಧಿತ ಪುರವಣಿಗಳ ಪ್ರಭಾವದಿಂದಲೇ ಯುವ ಜನತೆ ಕೃಷಿಯತ್ತ ಮುಖ ಮಾಡುತ್ತಿದೆ ಜೊತೆಗೆ ರೈತರಿಗೆ ಉತ್ತಮ ಮಾರ್